13th October 2024
🕉🙏 *ಸುಪ್ರಭಾತ* 🙏🕉
▬▬▬ஜ۩۞۩ஜ▬▬▬
🌺 🍁 ꧂⌒*✰‿✰
꧂⌒*✰‿✰ *ಸ್ಪೂರ್ತಿ ಕಿರಣ*
☘️☘️☘️☘️☘️☘️☘️☘️☘️☘️
*ವಯಸ್ಸಾದ ಮರ ಹಣ್ಣು ಕೊಡಲಾಗದಿದ್ದರೂ ನೆರಳನ್ನಾದರೂ ನೀಡುತ್ತದೆ.*
*ಹಾಗೆಯೇ ಹಿರಿಯರೂ ಕೂಡ ದುಡಿಯಲಾಗದಿದ್ದರೂ ಜೀವನದ ಪಯಣಕ್ಕೆ ಮಾರ್ಗದರ್ಶಕರಾಗಿರುತ್ತಾರೆ.*
*ಹಿರಿಯರನ್ನು ಗೌರವಿಸಿ.*
☘️☘️☘️☘️☘️☘️☘️☘️☘️☘️
----------------~--------------
*ಧರ್ಮೋ ರಕ್ಷತಿ ರಕ್ಷಿತಃ*
*🍵ಶುಭ ರವಿವಾರ ☕*
*ನೆರಳಿಗಾಗಿ ಗಿಡ ನೆಡಿ*
*॥ಸರ್ವೆಜನಃ ಸುಖಿನೋಭವಂತು॥*
▬▬▬▬▬ஜ۩۞۩ஜ▬▬▬▬▬
*ಓಂ ಶ್ರೀ ಗುರು ಬಸವಲಿಂಗಾಯ ನಮಃ*
*📚ದಿನಕ್ಕೊಂದು ವಚನ*
*ಲಜ್ಜೆಗೆಟ್ಟೆನು, ನಾಣುಗೆಟ್ಟೆನು;*
*ಕುಲಗೆಟ್ಟೆನು, ಛಲಗೆಟ್ಟೆನು:*
*ಸಂಗಾ, ನಿನ್ನ ಪೂಜಿಸಿ ಭವಗೆಟ್ಟೆನು ನಾನಯ್ಯಾ!*
*ಕೂಡಲಸಂಗಮದೇವಯ್ಯಾ*
*ನಿಮ್ಮ ಮುಟ್ಟಿ ಹುಟ್ಟುಗೆಟ್ಟೆನು ನಾನು!!*
*✍🏻✍🏻ಕ್ರಾಂತಿಯೋಗಿ ಬಸವಣ್ಣನವರು.*
*ವಚನದ ಸಂಕ್ಷಿಪ್ತ ಭಾವಾರ್ಥ*
*ನಾಚಿಕೆ, ನಾಡು, ಕುಲ, ಛಲ ಬಿಟ್ಟೆ. ಸಂಗಮೇಶಾ, ನಿನ್ನನ್ನು ಪೂಜಿಸಿ ನಾನು ಜಗದ ಜಂಜಾಟಕ್ಕೂ ದೂರಾದೆ, ನಿಮಗೆ ಅನುದಿನ ಸ್ಪರ್ಶಿಸಿ ಹುಟ್ಟು ಸಾವಿಗೂ ಹೊರತಾದೆ.*
*ಶರಣು ಶರಣಾರ್ಥಿಗಳು.*
🌷 ಶ್ರೀಮನ್ಮಹಾಭಾರತ 🌷*
*🔔 ॐ ಸಂಚಿಕೆ – 2507 ॐ 🔔*
*🌹🌹 ಉದ್ಯೋಗಪರ್ವ 🌹🌹*
*🔯ಭಗವದ್ಯಾನ ಉಪಪರ್ವ🔯*
******************
*🌷ಅಧ್ಯಾಯ – 130🌷*
*ದುರ್ಯೋಧನನ ಷಡ್ಯಂತ್ರವನ್ನು ಸಾತ್ಯಕಿಯು ಭೇದಿಸಿದುದು.*
*🌷ಭಾಗ – 3.🌷*
******************
*ॐ ನಮೋ ಭಗವತೇ ವಾಸುದೇವಾಯಃ ||*
*ನಾರಾಯಣಂ ನಮಸ್ಕ್ರತ್ಯ ನರಂ ಚೈವ ನರೋತ್ತಮಮ್ |*
*ದೇವೀಂ ಸರಸ್ವತೀಂ ವ್ಯಾಸಂ ತತೋ ಜಯಮುದೀರಯೇತ್ ||*
****************
ಶ್ರೀಕೃಷ್ಣನ ಮಾತುಗಳನ್ನು ಕೇಳಿದೊಡನೆಯೇ ಭ್ರಾಂತನಾದ ಧೃತರಾಷ್ಟ್ರನು, “ರಾಜ್ಯಲುಬ್ಧನಾದ, ಪಾಪಿಷ್ಠನಾದ ದುರ್ಯೋಧನನನ್ನು ಶೀಘ್ರಾತಿಶೀಘ್ರವಾಗಿ ಇಲ್ಲಿಗೆ ಕರೆದುಕೊಂಡು ಬಾ; ಅವನನ್ನು ಅನುಸರಿಸಿ ಹೋಗಿರುವ ರಾಜರೂ ಬರಲಿ” – ಎಂದು ವಿದುರನನ್ನು ಕುರಿತು ಪುನಃ ಹೇಳಿದನು.
ಅದರಂತೆ ದುರ್ಯೋಧನನಿಗೆ ಸಭಾಭವನಕ್ಕೆ ಬರುವ ಇಚ್ಛೆ ಇಲ್ಲದಿದ್ದರೂ ವಿದುರನು ಬಲಾತ್ಕಾರ ಪೂರ್ವಕವಾಗಿ ಪುನಃ ಸಭಾಮಂಟಪಕ್ಕೆ ಅವನನ್ನು ಕರೆತಂದನು.
ರಾಜನ ಆಜ್ಞೆಯಂತೆ ಅವನೊಡನೆ ಅವನ ಮಿತ್ರಾಮಾತ್ಯ-ಸೋದರರೂ ಮತ್ತು ರಾಜರೂ ಸಭಾಮಂದಿರವನ್ನು ಪ್ರವೇಶಿಸಿದರು.
ಕರ್ಣ, ದುಃಶಾಸನರಿಂದ ಪರಿವೃತನಾಗಿದ್ದ ದುರ್ಯೋಧನನನ್ನು ಕುರಿತು ಧೃತರಾಷ್ಟ್ರರಾಜನು ಹೇಳಿದನು:-
“ನಿನ್ನಂತಹ ಮೂಢನಾದವನು ಮತ್ತು ಕುಲಕಳಂಕನೂ ಸಿದ್ಧಮಾಡಿರುವ ಕೃಷ್ಣಬಂಧನದ ಯೋಜನೆಯು ಸಾಧಿಸಲಶಕ್ಯವಾದುದು.
ಇಂತಹ ಕುತ್ಸಿತಕಾರ್ಯಕ್ಕೆ ಪ್ರಯತ್ನಿಸುವುದೂ ಅಯಶಸ್ಕರವಾದುದು ಮತ್ತು ಈ ಕಾರ್ಯವು ಸತ್ಪುರುಷರ ನಿಂದೆಗೂ ಪಾತ್ರವಾದುದು.
ಮಹಾವೀರರಿಂದ ಎದುರಿಸಲು ಸಾಧ್ಯವಾಗದ, ಹತ್ತಿರ ಹೋಗಲೂ ಕಷ್ಟಸಾಧ್ಯನಾದ ಈ ಪುಂಡರೀಕಾಕ್ಷನನ್ನು ಪಾಪಿಷ್ಠರ ಸಹಾಯದಿಂದ ಬಲಾತ್ಕಾರವಾಗಿ ಬಂಧಿಸಲೂ ಇಚ್ಛಿಸಿರುವೆಯಲ್ಲವೇ?
ಮೂರ್ಖ! ಇಂದ್ರಪ್ರಮುಖರಾದ ದೇವತೆಗಳಿಗೂ ಯಾವನನ್ನು ಬಲಾತ್ಕಾರ ಪೂರ್ವಕವಾಗಿ ಬಂಧಿಸಲು ಸಾಧ್ಯವಿಲ್ಲವೋ ಅಂತಹ ಮಹಾಪುರುಷನನ್ನು ನೀನು – ಬಾಲಕನೊಬ್ಬನು ಅಂತರಿಕ್ಷದಲ್ಲಿ ಕಾಣುವ ಚಂದ್ರನನ್ನು ಹಿಡಿದುಕೊಳ್ಳಲು ಕೈಚಾಚುವಂತೆ – ಬಂಧಿಸಲು ಇಚ್ಛಿಸಿರುವೆ.
ಮೂಢ! ನಿನಗೆ ಶ್ರೀಕೇಶವನ ಮಹಿಮೆ ಏನೆಂಬುದು ಸ್ವಲ್ಪವೂ ತಿಳಿಯದು.
ಇವನ ಪರಾಕ್ರಮ ಎಷ್ಟೆಂಬುದನ್ನು ನೀನರಿಯೆ.
ದೇವ-ಮನುಷ್ಯ-ಗಂಧರ್ವ-ಅಸುರ-ಸರ್ಪ ಗಳಿಂದಲೂ ಇವನನ್ನು ಯುದ್ಧದಲ್ಲಿ ಎದುರಿಸಿ ನಿಲ್ಲಲು ಸಾಧ್ಯವಾಗುವುದಿಲ್ಲ, ತಿಳಿಯಿತೇ?
ಗಾಳಿಯನ್ನು ಕೈಯಿಂದ ಹಿಡಿದುಕೊಳ್ಳಲು ಸಾಧ್ಯವಾಗುವುದಿಲ್ಲ.
ಶೀತಾಂಶುವಾದ ಚಂದ್ರನನ್ನು ಕೈಯಿಂದ ಸ್ಪರ್ಶಿಸಲು ಸಾಧ್ಯವಾಗುವುದಿಲ್ಲ.
ಪೃಥ್ವಿಯನ್ನು ತಲೆಯಿಂದ ಹೊರಲು (ಧರಿಸಲು) ಸಾಧ್ಯವಾಗುವುದಿಲ್ಲ.
ಹಾಗೆಯೇ ಶ್ರೀಕೃಷ್ಣನನ್ನೂ ಬಲಾತ್ಕಾರದಿಂದ ಬಂಧಿಸಲೂ ಸಾಧ್ಯವಾಗುವುದಿಲ್ಲ.”
ಧೃತರಾಷ್ಟ್ರನು ಹೀಗೆಂದು ಹೇಳಿದ ನಂತರ ವಿದುರನು ಕೋಪಾಭಿಭೂತನಾಗಿದ್ದ ದುರ್ಯೋಧನನನ್ನು ಒಮ್ಮೆ ವೀಕ್ಷಿಸಿ ಹೇಳಿದನು:-
“ದುರ್ಯೋಧನ! ಈಗ ನಾನು ಹೇಳಲಿರುವ ಮಾತನ್ನು ಮನಸ್ಸಿಟ್ಟು ಕೇಳು.
ಅನಂತರ ನಿನಗೆ ತೋರಿದಂತೆ ಮಾಡು.
ದ್ವಿವಿಧನೆಂಬ ದಾನವೇಂದ್ರನು ಸೌಭನೆಂಬ ಪಟ್ಟಣದ ಮಹಾದ್ವಾರದಲ್ಲಿ ಮಹತ್ತರವಾದ ಕಲ್ಲಿನ ಮಳೆಯಿಂದ ಶ್ರೀಕೇಶವನನ್ನು ಮುಚ್ಚಿಬಿಟ್ಟನು.
ಪರಾಕ್ರಮದ ಮೂಲಕವಾಗಿ ಶ್ರೀಕೃಷ್ಣನನ್ನು ಹಿಡಿಯುವ ಇಚ್ಛೆಯಿಂದ ದಾನವನು ಸರ್ವಪ್ರಯತ್ನಗಳನ್ನೂ ಮಾಡಿದನು.
ಆದರೂ ಇವನನ್ನು ಬಂಧಿಸಲು ದ್ವಿವಿಧನಿಗೆ ಸಾಧ್ಯವಾಗಲಿಲ್ಲ.
ಅಂತಹವನನ್ನು ನೀನು ಬಲಾತ್ಕಾರದಿಂದ ನಿನ್ನ ವಶಮಾಡಿಕೊಳ್ಳಲು ಇಚ್ಛಿಸಿರುವೆ.
ನರಕಾಸುರನ ಪ್ರಾಗ್ಜ್ಯೋತಿಷವೆಂಬ ಪಟ್ಟಣಕ್ಕೆ ಶೌರಿಯೊಮ್ಮೆ ಹೋಗಿದ್ದಾಗ ನರಕಾಸುರನು ಸಕಲ ದಾನವರ ಸಹಾಯವನ್ನೂ ಪಡೆದು ಶ್ರೀಕೃಷ್ಣನನ್ನು ಬಂಧಿಸಲು ಪ್ರಯತ್ನಿಸಿ ವಿಫಲನಾದನು.
ಅಂತಹವನನ್ನು ನೀನಿಂದು ಬಲಾತ್ಕಾರ ಪೂರ್ವಕವಾಗಿ ಬಂಧಿಸಲು ಇಚ್ಛಿಸಿರುವೆ.
ಅನೇಕ ಸಹಸ್ರಯುಗಗಳ ಆಯುಷ್ಯವನ್ನು ಪಡೆದಿದ್ದ ನರಕಾಸುರನನ್ನು ಶ್ರೀಕೃಷ್ಣನು ಯುದ್ಧದಲ್ಲಿ ಸಂಹರಿಸಿ ಅವನ ಕಾರಾಗೃಹದಲ್ಲಿದ್ದ ಸಾವಿರಾರು ಕನ್ಯೆಯರನ್ನು ಬಿಡಿಸಿಕೊಂಡು ಬಂದು ಯಥಾವಿಧಿಯಾಗಿ ಅವರನ್ನು ವಿವಾಹ ಮಾಡಿಕೊಂಡನು.
ಅಂತಹ ಪರಾಕ್ರಮಿಯಾದ ಶೌರಿಯನ್ನು ನೀನು ಬಂಧಿಸಲು ಇಚ್ಛಿಸಿರುವೆ.
ನಿರ್ಮೋಚನವೆಂಬ ಪಟ್ಟಣದಲ್ಲಿ ಆರುಸಾವಿರ ಮಹಾಸುರರೂ ಶ್ರೀಕೃಷ್ಣನನ್ನು ಬಂಧನದಲ್ಲಿ ಇಡಲು ಸಮರ್ಥರಾಗಲಿಲ್ಲ.
ಅವರೇ ಶ್ರೀಕೃಷ್ಣನಿಂದ ಪಾಶಗಳ ಮೂಲಕವಾಗಿ ಬಂಧಿಸಲ್ಪಟ್ಟರು.
ಅಂತಹಾ ಶೌರಿಯನ್ನು ನೀನು ಬಲಾತ್ಕಾರದಿಂದ ವಶಪಡಿಸಿಕೊಳ್ಳಲು ಯತ್ನಿಸಿರುವೆ.
ಇವನು ಬಾಲಕನಾಗಿದ್ದಾಗಲೇ ಪೂತನಾ ಎಂಬ ರಾಕ್ಷಸಿಯನ್ನೂ, - ಕಂಸನ ಪರಿವಾರದಲ್ಲಿ ಪಕ್ಷಿಯ ರೂಪದಲ್ಲಿದ್ದ ಬಕನೆಂಬ ರಾಕ್ಷಸನನ್ನೂ ಸಂಹರಿಸಿದನು.
ಇಂದ್ರನೊಮ್ಮೆ ಕುಪಿತನಾಗಿ ಪ್ರಪಂಚವೇ ಕೊಚ್ಚಿಹೋಗುವಂತೆ ಮಳೆಗರೆದಾಗ ಗೋವುಗಳ ಸಲುವಾಗಿ ಗೋವರ್ಧನ ಪರ್ವತವನ್ನೇ ತನ್ನ ಕೈಯಿಂದ ಮೇಲೆತ್ತಿ ಗೋವುಗಳನ್ನೂ ಗೋಪಾಲಕರನ್ನೂ ಸಂರಕ್ಷಿಸಿದನು.
*(ಮುಂದುವರಿಯುವುದು)*
***************
*|| ಶ್ರೀಕೃಷ್ಣಾರ್ಪಣಮಸ್ತು ||*
*|| ನಾಹಂ ಕರ್ತಾ ಹರಿಃ ಕರ್ತಾಃ ||*
****************
ಸಂಗ್ರಹ:-
“ಭಾರತ ಧರ್ಶನ" ಪ್ರಕಾಶನದವರ “ಶ್ರೀಮನ್ಮಹಾಭಾರತ” ಗ್ರಂಥದಿಂದ ಆಯ್ದ ಭಾಗ.
ವಿಜಯೇಂದ್ರ ರಾಮನಾಥ ಭಟ್.
ಶಿವಮೊಗ್ಗ. Shivamogga.
****************
*13-10-2024.*
****************
🌹🔔🕉🔔🌹
ನುಡಿ ಮುತ್ತು* 📖
*ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಯಾವತ್ತೂ,*
*ಭಯಾನಕ ಹೋರಾಟದ ಫಲವೇ ಹೊರತು ಸುಲಭವಾಗಿ ಸಿಕ್ಕುವಂತಹದ್ದಲ್ಲ.*
🙏 *ಶುಭೋದಯ* 🙏 ಶಕ್ತಿ ಮೀರ್ದ ಪರೀಕ್ಷೆ ವಿಧಿ ನಿಯಮಿಸಿರೆ |
ಯುಕ್ತಿ ಮೀರ್ದ ಪ್ರಶ್ನೆಗಳನು ಕೇಳುತಿರೆ ॥
ಚಿತ್ತವನು ತಿರುಗಿಸೊಳಗಡೆ; ನೋಡು, ನೋಡಲ್ಲಿ |
ಸತ್ವದಚ್ಛಿನ್ನ ಝರಿ - ಮಂಕುತಿಮ್ಮ ॥ ॥೫೫೬॥
ವಿಧಿಯು ನಿನಗೆ ಶಕ್ತಿಗೆ ಮೀರಿದ ಪರೀಕ್ಷೆಗಳನ್ನು ಹಲವು ಸಲ ನಿಯಮಿಸುತ್ತದೆ. "ಈ ಕೆಲಸ ನನ್ನಿಂದ ಸಾಧ್ಯವೇ ಇಲ್ಲ, ಆಗೊಲ್ಲಪ್ಪ,ನನ್ನ ಕೈಲಿ ಆಗೋದಿಲ್ಲ" ಅನ್ನುವಂತಹ ಪರೀಕ್ಷೆಗಳಿವು. ಇನ್ನು ಅದು(ವಿಧಿ) ಕೇಳುವ ಪ್ರಶ್ನೆಗಳೋ, ನಮ್ಮ ಉಪಾಯಕ್ಕೆ ನಿಲುಕದ ಪ್ರಶ್ನೆಗಳವು. ಅಂತಹ ಸಮಯದಲ್ಲಿ ನಾವೇನು ಮಾಡಬೇಕು? ಇದು ನಮ್ಮ ಪ್ರಶ್ನೆ. ಸಂದಿಗ್ಧ ಸ್ಥಿತಿ! ಹೇ ಮನುಷ್ಯ, ಆವಾಗ ನೀನು ನಿನ್ನ ಮನಸ್ಸನ್ನು ನಿನ್ನ ಒಳಗಡೆ ತಿರುಗಿಸಿ ನೋಡು. ನೋಡು, ನೋಡಲ್ಲಿ ಅಲ್ಲಿ ನಿನ್ನ ಒಳಗಡೆ ಅವಿರತವಾಗಿ(ಅಚ್ಛಿನ್ನ) ಹರಿಯುತ್ತಿರುವ ಸತ್ವದ ಝರಿ ಕಾಣಿಸುತ್ತದೆ. ಆ ಬತ್ತದ, ಸತ್ವದ ಝರಿಯನ್ನು ನೀನು ಬೇಕಾದ ಹಾಗೆ ಉಪಯೋಗಿಸಿಕೋ - ಮಂಕುತಿಮ್ಮ ॥೫೫೬॥
The Destiny will make you to face thousands of tests which is beyond your power or control. It will ask you such questions that you think it is not possible to solve it. It may be beyond your ideas and imagination. What should do you in such circumstances? Then please turn your mind to your inner side! You will find the purest of pure source of essence(rivulets)inside yourself. This Satva or essence will never go dry and you can make use of this as you wish. ॥ 556||
🌹🔔🕉🔔🌹
*|| ಶ್ರೀಮದ್ಭಗವದ್ಗೀತೆ ||*
🌹🔔🕉🔔🌹
*ಓಂ ದೇವಂ ನಾರಾಯಣಂ ನತ್ವಾ ಸರ್ವದೋಷವಿವರ್ಜಿತಂ|*
*ಪರಿಪೂರ್ಣಂ ಗುರೂಂಶ್ಚಾನ್ ಗೀತಾರ್ಥಂ ವಕ್ಷ್ಯಾಮಿ ಲೇಶತಃ||*
*🌺|| ಅಧ್ಯಾಯ – 18 ||🌺*
*🌺|| ಮೋಕ್ಷಸಂನ್ಯಾಸ ಯೋಗ ||🌺*
*🌺|| ಶ್ಲೋಕ – 42 (664) ||🌺*
*🌺|| ಸಂಚಿಕೆ – 2098 ||🌺*
******************
*|| ಶ್ರೀಭಗವಾನುವಾಚ ||*
*ಶಮೋ ದಮಸ್ತಪಃ ಶೌಚಂ ಕ್ಷಾಂತಿರಾರ್ಜವಮೇವ ಚ|*
*ಜ್ಞಾನಂ ವಿಜ್ಞಾನಮಾಸ್ತಿಕ್ಯಂ ಬ್ರಹ್ಮಕರ್ಮ ಸ್ವಭಾವಜಂ||18-42||*
******************
*ಅನುವಾದ:-*
ಶಮಃ = ಶ್ರೀ ಭಗವಂತನಲ್ಲಿ ಆಸಕ್ತವಾದ ಬುದ್ಧಿಯು, ದಮಃ = ಇಂದ್ರಿಯನಿಗ್ರಹವು, ತಪಃ = ಬ್ರಹ್ಮಚರ್ಯ ಮೊದಲಾದ ಕಾಯಿಕ ವಾಚಿಕ ಮಾನಸಿಕ ತಪಸ್ಸು, ಶೌಚಂ = ಬಾಹ್ಯಶುದ್ಧಿಯು, ಆಭ್ಯಂತರ ಶುದ್ಧಿಯು, ಕ್ಷಾಂತಿಃ = ಕೋಪ ಹುಟ್ಟದಿರುವುದು, ಚ = ಮತ್ತು, ಆರ್ಜವಂ = ಮನಸ್ಸು ವಚನ ದೇಹ ಕರ್ಮ ಇವುಗಳಲ್ಲಿ ವ್ಯತ್ಯಾಸವಿಲ್ಲದೆ ಒಂದೇ ರೀತಿಯಾಗಿ ಇರುವಿಕೆ, ಜ್ಞಾನಂ = ಸಾಮಾನ್ಯ ಜ್ಞಾನವು, ವಿಜ್ಞಾನಂ = ವಿಶೇಷ ಜ್ಞಾನವು, ಆಸ್ತಿಕ್ಯಮೇವ ಚ = ಧರ್ಮಾದಿಗಳನ್ನು ಅನುಷ್ಠಾನ ಮಾಡಿದರೆ ಪರಮಾತ್ಮನಿಗೆ ಪ್ರೀತಿಯಾಗಿ ಪರಲೋಕದಲ್ಲಿ ಸುಖಾದಿರೂಪವಾದ ಪ್ರಯೋಜನವಿದೆ ಎಂಬೀ ಭಾವನೆಯೂ, ಇದು ಮೊದಲಾದ ಕರ್ಮಸಮುದಾಯವು, ಸ್ವಭಾವಜಂ = ಸಹಜವಾದ, ಬ್ರಾಹ್ಮಂ ಕರ್ಮ = ಬ್ರಾಹ್ಮಣರ ಸಂಬಂಧಿಯಾದ ಕರ್ಮವು.
******************
*ಭಾವಾರ್ಥ:-*
*ಗೀತಾ-ತತ್ತ್ವವಿವೇಚನೀ:-*
ಶ್ಲೋಕ 41 ರಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರ ಸ್ವಾಭಾವಿಕ ನಿಯತಕರ್ಮಗಳನ್ನು ಹೇಳುವ ಪ್ರಸ್ತಾವನೆ ಮಾಡಿರುತ್ತಾನೆ ಶ್ರೀಕೃಷ್ಣ.
ಹೀಗೆ ಮಾಡಲಾದ ಪ್ರಸ್ತಾವನೆಗನುಸಾರ ಮೊದಲು ಬ್ರಾಹ್ಮಣನ ಸ್ವಾಭಾವಿಕ ಕರ್ಮಗಳನ್ನು ಶ್ಲೋಕ 42 ರಲ್ಲಿ ವಿವರಿಸಿ ಹೇಳುತ್ತಾನೆ ಭಗವಂತ:-
“ಅಂತಃಕರಣವನ್ನು ನಿಗ್ರಹಿಸುವುದು; ಇಂದ್ರಿಯಗಳ ದಮನ ಮಾಡುವುದು; ಧರ್ಮಪಾಲನೆಗಾಗಿ ಕಷ್ಟವನ್ನು ಸಹಿಸುವುದು; ಹೊರಗೊಳಗಿಂದ ಶುದ್ಧನಾಗಿರುವುದು; ಬೇರೆಯವರ ಅಪರಾಧಗಳನ್ನು ಕ್ಷಮಿಸುವುದು; ಮನಸ್ಸು ಇಂದ್ರಿಯಗಳು ಮತ್ತು ಶರೀರವನ್ನು ಸರಳವಾಗಿರಿಸುವುದು; ವೇದ, ಶಾಸ್ತ್ರ, ದೇವರು ಮತ್ತು ಪರಲೋಕಾದಿಗಳಲ್ಲಿ ಶ್ರದ್ಧೆಯನ್ನಿಡುವುದು; ವೇದಶಾಸ್ತ್ರಗಳ ಅಧ್ಯಯನ ಮತ್ತು ಅಧ್ಯಾಪನ ಮಾಡುವುದು; ಪರಮಾತ್ಮ ತತ್ತ್ವದ ಅನುಭವ ಪಡೆಯುವುದು – ಇವೆಲ್ಲವೂ ಬ್ರಾಹ್ಮಣನ ಸ್ವಾಭಾವಿಕವಾದ ಕರ್ಮಗಳಾಗಿವೆ”.
*ಪ್ರಶ್ನೆ:-*
“ಆರ್ಜವಮ್” ಎಂದರೇನು?
*ಉತ್ತರ:-*
ಮನಸ್ಸು, ಇಂದ್ರಿಯಗಳು ಮತ್ತು ಶರೀರವನ್ನು ಸರಳವಾಗಿ ಇಡುವುದು ಅರ್ಥಾತ್ – ಮನಸ್ಸಿನಲ್ಲಿ ಯಾವುದೇ ಪ್ರಕಾರದ ದುರಾಗ್ರಹ ಮತ್ತು ವಕ್ರತೆ ಇಲ್ಲದಿರುವುದು; ಹೇಗೆ ಮನಸ್ಸಿನ ಭಾವವಿದೆಯೋ ಹಾಗೆಯೇ ಇಂದ್ರಿಯಗಳ ಮೂಲಕ ಪ್ರಕಟಮಾಡುವುದು; ಇದಲ್ಲದೆ ಶರೀರದಲ್ಲಿಯೂ ಕೂಡ ಯಾವುದೇ ಪ್ರಕಾರದ ವಕ್ರತೆ ಇರಿಸದಿರುವುದು ಇವೆಲ್ಲವೂ “ಆರ್ಜವ”ದ ಅಂತರ್ಗತವಾಗಿದೆ.
*ಪ್ರಶ್ನೆ:-*
“ಆಸ್ತಿಕ್ಯಮ್” ಪದದ ಅರ್ಥವೇನು?
*ಉತ್ತರ:-*
“ಆಸ್ತಿಕ್ಯಮ್” ಪದವು ಆಸ್ತಿಕತೆಯ ವಾಚಕವಾಗಿದೆ.
ವೇದ, ಶಾಸ್ತ್ರ, ದೇವರು ಮತ್ತು ಪರಲೋಕ ಇವೆಲ್ಲದರ ಅಸ್ತಿತ್ವದಲ್ಲಿ ಪೂರ್ಣ ವಿಶ್ವಾಸ ಇಡುವುದು; ವೇದ-ಶಾಸ್ತ್ರಗಳ ಮತ್ತು ಮಹಾತ್ಮರ ವಚನಗಳನ್ನು ಯಥಾರ್ಥವಾಗಿ ಒಪ್ಪುವುದು ಮತ್ತು ಧರ್ಮಪಾಲನೆಯಲ್ಲಿ ದೃಢ ವಿಶ್ವಾಸ ಇಡುವುದು – ಇವೆಲ್ಲವೂ ಆಸ್ತಿಕತೆಯ ಲಕ್ಷಣವಾಗಿದೆ.
*ಪ್ರಶ್ನೆ:-*
ಯಾವುದನ್ನು “ಜ್ಞಾನ” ಎಂದು ಹೇಳುತ್ತಾರೆ?
*ಉತ್ತರ:-*
ವೇದಶಾಸ್ತ್ರಗಳನ್ನು ಶ್ರದ್ಧಾಪೂರ್ವಕವಾಗಿ ಅಧ್ಯಯನ-ಅಧ್ಯಾಪನ ಮಾಡುವುದರ ಮತ್ತು ಅವುಗಳಲ್ಲಿ ವರ್ಣಿತ ಉಪದೇಶವನ್ನು ಚೆನ್ನಾಗಿ ತಿಳಿಯುವುದರ ಹೆಸರು ಇಲ್ಲಿ “ಜ್ಞಾನ” ವಾಗಿದೆ.
*ಪ್ರಶ್ನೆ:-*
“ವಿಜ್ಞಾನಮ್” ಪದವು ಯಾವುದರ ವಾಚಕವಾಗಿದೆ?
*ಉತ್ತರ:-*
ವೇದಶಾಸ್ತ್ರಗಳಲ್ಲಿ ಹೇಳಿರುವ ಮತ್ತು ಮಹಾಪುರುಷರಿಂದ ಕೇಳಿರುವ ಸಾಧನೆಗಳ ಮೂಲಕ ಪರಮಾತ್ಮನ ಸ್ವರೂಪದ ಸಾಕ್ಷಾತ್ಕಾರ ಮಾಡಿಕೊಳ್ಳುವುದರ ಹೆಸರು “ವಿಜ್ಞಾನ” ವಾಗಿದೆ.
*|| ಓಂ ತತ್ಸತ್ ||*
*********************
ಕೃಪೆ:-
ಗೀತಾ ಪ್ರೆಸ್, ಗೋರಕಪುರ್ ರವರ ’ಶ್ರೀಮದ್ಭಗವದ್ಗೀತೆ” ಗ್ರಂಥದಿಂದ ಆಯ್ದ ಭಾಗ.
******************
*|| ಕನ್ನಡ ಶ್ಲೋಕ ರೂಪ ||*
(ರಚನೆ: ಶ್ರೀ ವಿಜಯನಾಥ ಭಟ್ಟ. “ಕೌಂಡಿನ್ಯ”.)
*ಭಗವಂತನುಲಿದ*
*ಮನದ ಸಂತುಲನ, ಇಂದ್ರಿಯಗಳ ಹತೋಟಿ, ಜಪ ತಪಸು ನೈರ್ಮಲ್ಯ ಸೈರಣೆ ಹಾವಭಾವ|*
*ನೇರ ಶಾಸ್ತ್ರಗಳರಿವು, ಸಂಶೋಧನೆಯ ದೃಷ್ಟಿ ಭಗವಂತನಲಿ ಆಸ್ಥೆ, ಬ್ರಹ್ಮ ಸ್ವಭಾವ||18-42||”.*
***************
*|| ಕೊಂಕಣಿ ಶ್ಲೋಕ ರೂಪ ||*
(ರಚನೆ: ಶ್ರೀ ಅಶೋಕ ಶ್ರೀಧರ ಭಟ್, ಅಂಕೋಲ.)
*ಶ್ರೀಕೃಷ್ಣಾನ ಮಳ್ಹೆ:-*
*ಶಾಂತಿ ಸಂಯಮ ವಿನಯ ತಪ ಶುಚಿ ಸತ್ಯ ಕ್ಷಮಾ|*
*ಜ್ಞಾನ ವಿಜ್ಞಾನ ಆಸ್ತಿಕ್ಯ ದ್ವಿಜ ಸ್ವಾಭಾವಿಕ ಕರ್ಮಾ||18-42||.*
******************
*ಜಿಜ್ಞಾಸಾ - 593*
*ಪುರುಷೋತ್ತಮ ಯೋಗಾಧ್ಯಾಯದಲ್ಲಿ ಪುರುಷೋತ್ತಮತ್ವ – 10.*
*ಪ್ರಶ್ನೆ:-*
ಕ್ಷರಾಕ್ಷರ ಪುರುಷರಿಗಿಂತ ಬೇರೆ ಆಗಿದ್ದು ಉತ್ತಮನಾಗಿರುವ ಭಗವಂತನು ಪರಮಾತ್ಮಾ ಎಂದು ಶಾಸ್ತ್ರದಲ್ಲಿ ಹೇಳಲ್ಪಟ್ಟಿರುವನೆಂದು ತಿಳಿಸಿದ ಗೀತಾಚಾರ್ಯ ಮುಂದೆ ಯಾರು ಲೋಕತ್ರಯವನ್ನೂ ಪ್ರವೇಶಿಸಿ, ನಿರ್ವಿಕಾರನಾಗಿ ಲೋಕತ್ರಯದ ಧಾರಣೆ-ಪೋಷಣೆಗಳನ್ನು ನಡೆಸಲು ಸಮರ್ಥನಾಗಿರುವನೋ ಅಂತಹವನೆಂದು ಪರಿಚಯಿಸಿಕೊಟ್ಟಿರುವ ಸ್ವಾರಸ್ಯ ಏನು?
*ಉತ್ತರ:-*
ಕ್ಷರಾಕ್ಷರಪುರುಷರಿಗಿಂತ ಅನ್ಯ ಹಾಗೂ ಉತ್ತಮನಾಗಿದ್ದು “ಪರಮಾತ್ಮಾ” ಎಂಬುದಾಗಿ ಶಾಸ್ತ್ರದಲ್ಲಿ ಹೇಳಲ್ಪಟ್ಟಿರುವನೆಂದು ಉದಾಹರಿಸಲಾದ ಶಾಸ್ತ್ರಾರ್ಥಕ್ಕೆ ಅನುಭವದ ಸಂವಾದವನ್ನು ತೋರಿಸುವುದಕ್ಕಾಗಿ, ಲೋಕತ್ರಯವನ್ನು ಪ್ರವೇಶಿಸಿ ಧಾರಣೆ-ಪೋಷಣೆಗಳನ್ನು ನಡೆಸುವ ಪ್ರಮೇಯವನ್ನು ತಿಳಿಸಲಾಗಿದೆ.
ನಮ್ಮ ಹಾಗೂ ನಮ್ಮ ಸುತ್ತಮುತ್ತಲಿನವರ ಧಾರಣೆ-ಪೋಷಣೆ ನಮ್ಮಿಂದಲೇ, ಆಯಾ ವ್ಯಕ್ತಿಗಳಿಂದಲೇ ನಡೆಯದೆ, ಕಾಣದ ವ್ಯಕ್ತಿಯೊಬ್ಬನ ಪ್ರಭಾವ ಧಾರಣೆ-ಪೋಷಣೆಗಳ ಮೇಲೆ ಇದೆ ಎಂಬುದು ಎಲ್ಲರಿಗೆ ಅನುಭವಸಿದ್ಧವಾದುದು.
ಕಾಣದ ವ್ಯಕ್ತಿ ಮತ್ತಾರೂ ಅಲ್ಲ; ಪರಮಾತ್ಮನೇ.
ಎಲ್ಲರ ಒಳಹೊಕ್ಕು ಅಂತರ್ಯಾಮಿಯಾಗಿದ್ದು ಯಾರಿಗೂ ಕಾಣಿಸಿಕೊಳ್ಳದಂತೆ ಅವನು ಧಾರಣೆ-ಪೋಷಣೆ ನಡೆಸುವನು.
ಹಾಗೆ ನಡೆಸಲು ಬೇಕಾದ ಸಾಮರ್ಥ್ಯ ಅವನಲ್ಲಿದೆ.
ನಾಶವೇ ಮುಂತಾದ ವಿಕಾರಗಳಿಗೆ ಒಳಗಾಗುವ ಲೋಕತ್ರಯದೊಳಗೆ ಹೊಕ್ಕೂ ತಾನು ಯಾವುದೇ ವಿಕಾರಕ್ಕೆ ಒಳಗಾಗದೆಯೇ ಅದರ ಧಾರಣೆ-ಪೋಷಣೆ ನಡೆಸುವ ಸಾಮರ್ಥ್ಯ ಅವನಲ್ಲಿದೆ – ಎಂದು ಭಗವಂತ ಸಾರಿರುವನು.
ಹೀಗೆ ಹಿಂದೆ ಉದಾಹೃತವಾದ ಶಾಸ್ತ್ರ ಸಂದೇಶಕ್ಕೆ ಅನುಭವದ ಮೆರುಗನ್ನು ಹಚ್ಚುವ ಪ್ರಕ್ರಿಯೆ ಇದಾಗಿದೆ.
*|| ಓಂ ತತ್ಸತ್ ||*
***************
ಕೃಪೆ:-
ತತ್ವ ಸಂಶೋಧನ ಸಂಸತ್: ಶ್ರೀ ಪಲಿಮಾರು ಮಠ: ಉಡುಪಿ – ಇವರಿಂದ ಪ್ರಕಾಶಿಸಲ್ಪಟ್ಟ *“ಗೀತೆಗೊಂದು ಕಡೆಗೋಲು”* ಗ್ರಂಥದಿಂದ ಆಯ್ದ ಭಾಗ.
***************
ಸಂಗ್ರಹ:-
ವಿಜಯೇಂದ್ರ ರಾಮನಾಥ ಭಟ್.
ಶಿವಮೊಗ್ಗ. Shivamogga.
***************
*13-10-2024.*
***************
*|| ನಾಹಂ ಕರ್ತಾ ಹರಿಃ ಕರ್ತಾಃ ||*
🌹🔔🕉🔔🌹